ದಿ || ಶ್ರೀ ಜೆ. ಟಿ. ಸುಂದರೇಶ್

ಮೊನ್ನೆ Feb 13, 2024 ರಂದು ನಮ್ಮ ಮೆಚ್ಚಿನ ಪ್ರಾಂಶುಪಾಲರಾಗಿದ್ದ ಶ್ರೀ ಜೆ ಟಿ ಸುಂದರೇಶ್ ಸರ್ ದೈವಾಧೀನರಾದರೆಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು! ನಿಜಕ್ಕೂ ಇದು ನಂಬಲಸಾಧ್ಯ! ಈಗಲೂ ಪ್ರಿನ್ಸಿ ಸರ್ ನಮ್ಮಲ್ಲೇ ಇದ್ದಾರೆ. ಈ ಹಿಂದೆ 2019 ರಲ್ಲಿ ಗುರುವಂದನಾ ಕಾರ್ಯಕ್ರಮದ ಸಮಯದಲ್ಲಿ ಬರೆದಿದ್ದ ಬರಹವೊಂದನ್ನು ಹಂಚಿಕೊಳ್ಳುತ್ತಿದ್ದೇನೆ

ಗೆಳೆಯರೇ,
ಬಹಳದಿನಗಳಿಂದ ಕಾತುರದಿಂದ ಕಾದಿದ್ದ ಸಮ್ಮಿಲನ(2-6-2019 ಭಾನುವಾರ) ವೈಭವ ಸಡಗರಗಳಿಂದ ನೆರವೇರಿತು. ದೂರದೂರುಗಳಿಂದ ಅನೇಕರು ಬಂದು ಈ ವೈಭವಯುತವಾದ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು. ಅನೇಕರಿಗೆ ಬಾಗಿಯಾಗಲು ಸಾಧ್ಯವಾಗಲಿಲ್ಲವಾದರೂ ಅವರ ಹಾರೈಕೆ, ನಮ್ಮೊಂದಿಗಿತ್ತು ಹಾಗಾಗಿ ಈ ಸಂಭ್ರಮ ಮುಗಿಲು ಮುಟ್ಟಲು ಕಾರಣವಾಗಿತ್ತು.
ಕಾರ್ಯಕ್ರಮವು ನಿವೃತ್ತ ಪ್ರಾಂಶುಪಾಲ ಶ್ರೀ ಸುಂದರೇಶ್ ಅವರನ್ನು ವಿಶಿಷ್ಟವಾದ ಮೆರವಣಿಗೆಯ ಮೂಲಕ ಅವರನ್ನು ಸಭಾಂಗಣಕ್ಕೆ ಕರೆದುಕೊಂಡು ಬಂದ ರೀತಿಯೇ ವಿಶಿಷ್ಟ ಹಾಗೂ ಸಂಭ್ರಮದಿಂದ ಕೂಡಿತ್ತು.
ಗುರು ವಂದನೆ ಕಾರ್ಯಕ್ರಮ ಅರ್ಥಪೂರ್ಣ ವಾಗಿತ್ತು.
ಬದಲಾದ ಕಾಲಘಟ್ಟದಲ್ಲಿ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ಇಷ್ಟೊಂದು ಭಕ್ತಿ, ಪ್ರೀತಿ ವ್ಯಕ್ತಪಡಿಸುವ ಮನಸ್ಥಿತಿ ನಮ್ಮೆಲ್ಲರಿಗಿರುವುದು ಕಲಿಸಿದ ಗುರುಗಳ ಸಾರ್ಥಕ ಬದುಕಿನ ಕನ್ನಡಿಯಾಗಿದೆ.
ಇನ್ನು SPT ಹಳೇ ವಿದ್ಯಾರ್ಥಿ ಸಂಘ ಇಷ್ಟೊಂದು ಕ್ರಿಯಾಶೀಲವಾಗಿರುವ ಮೂಲ ಕಾರಣವೇ ಶ್ರೀ ಸುಂದರೇಶ್ ಮತ್ತು ಕೆ ಕೃಷ್ಣಪ್ರಸಾದ್ ಎಂದರೆ ತಪ್ಪಾಗಲಾರದು. ಅವರಿಗಿದ್ದ ಹೃದಯವೈಶಾಲ್ಯ, ಪ್ರೀತಿ ಮತ್ತು
ಚತುರತೆ ಇಂದು ಹಳೇ ವಿದ್ಯಾರ್ಥಿ ಸಂಘ ಹೆಮ್ಮರವಾಗಿ ಬೆಳೆದು ನಿಂತದ್ದೇ ಸಾಕ್ಷಿ.
ಗುರುವಂದನೆ ಯ ಪ್ರಮುಖ ಆಕರ್ಷಣೆಯಾಗಿ ಸಂಡೇ ವಿತ್ ಸುಂದರೇಶ್ ಕಾರ್ಯಕ್ರಮ ಅತ್ಯುತ್ತಮ ವಾಗಿ ಮೂಡಿಬಂದಿತು. ಗೆಳೆಯರಾದ ಅರುಣ್ ಮತ್ತು ವಿಜಿಶೆಟ್ಟಿ, ಪರಮ ಗುರುವಿನ ಸಾರ್ಥಕ ಜೀವನದ ಪ್ರಮುಖ ಘಟ್ಟಗಳನ್ನು ಅನಾವರಣ ಗೊಳಿಸುವಲ್ಲಿ ಯಶಸ್ವಿಯಾದರು. ಶ್ರೀ ಸುಂದರೇಶ್ ಅವರ ಸರಳ ಜೀವನ ಶಿಸ್ತು, ಪ್ರಾಮಾಣಿಕತೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟ ಪರಿ ನಿಜಕ್ಕೂ ವಿನೂತನ ವಾಗಿತ್ತು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿರೆಲ್ಲರೂ ಇದನ್ನು ಅಭಿನಂದಿಸಿದ್ದು ಇದರ ಯಶಸ್ಸಿಗೆ ಸಾಕ್ಷಿಯಾಯಿತು.
ಈ ಕಾರ್ಯಕ್ರಮದ ಒಂದು ಪ್ರಮುಖ ಭಾಗದಲ್ಲಿ ಶ್ರೀ ಸುಂದರೇಶ್ ಹೇಳಿದ ಮಾತು ಅವರ ಮೇರು ವ್ಯಕ್ತಿತ್ವವನ್ನು ಅನಾವರಣ ಗೊಳಿಸುತ್ತದೆ. “ನನ್ನ ಸಾಧನೆಗಿಂತ ನನ್ನ ಶಿಷ್ಯರ ಸಾಧನೆ ಅಮೋಘ!” ಎನ್ನುವ ಅವರ ಮಾತು ಅವರ ಹೃದಯವೈಶಾಲ್ಯ ನಿರೂಪಿಸುತ್ತದೆ. ಇದು ನಿಜಕ್ಕೂ ಗುರುವಿನ ನಿಸ್ವಾರ್ಥ ಬದುಕಿನ ಗುರಿ! ಎಲ್ಲ ಶಿಷ್ಯರ ಸಾಧನೆ ಗೆ ಅವರೇ ಮೂಲ ಪ್ರೇರಣೆ ಹಾಗಾಗಿ ಇದು ನಿಜವಾದ ಗುರುವಿನ ಸಾಧನೆ!
ದಿ||ಕೆ ಕೃಷ್ಣಪ್ರಸಾದ್ ಅವರ ಪುಣ್ಯ ಸ್ಮರಣೆ ಸಮಯದಲ್ಲಿ ಶ್ರೀಮತಿ ಕೃಷ್ಣಪ್ರಸಾದ್ ರು ಗುರುಶಿಷ್ಯ ಸಂಬಂಧ ದ ಮಾತನಾಡುವಾಗ ನಿಜಕ್ಕೂ ಸಭಾಂಗಣ ಭಾವುಕ ಕ್ಷಣವಾಗಿತ್ತು. ಅವರ ಕುಟುಂಬದ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸಮಾರಂಭ ಕ್ಕೊಂದು ಅರ್ಥ ತಂದುಕೊಟ್ಟಿತು.
ಚಂದನಾ, ವಿಜೇತಾ ಮತ್ತು ವಿಜಿಶೆಟ್ಟಿ ಸುಶ್ರಾವ್ಯ ವಾಗಿ ಹಾಡಿ ರಂಜಿಸಿದರೆ, ಚೇತನ್ ಮತ್ತಿತರ ನೃತ್ಯ, ಗಿರೀಶ್ ಹಂದೆ ಮತ್ತು ವಿಕ್ಕಿ ಸಂಗಡಿಗರ ಕಿರುಪ್ರಹಸನ ದಿಂದ ಪ್ರೇಕ್ಷಕರನ್ನು ರಂಜಿಸಿದರು.
ಅನೇಕ ಹಳೆ ವಿದ್ಯಾರ್ಥಿ ಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ದೇಶ ವಿದೇಶಗಳಲ್ಲಿರುವ ಹಳೆ ವಿದ್ಯಾರ್ಥಿ ಗಳು ವೀಡಿಯೋ ಮೂಲಕ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದ್ದರು.
ಮದ್ಯಾನಃ ರುಚಿಕಟ್ಟಾದ ಭೋಜನದ, ಸಂಜೆ ಟೀ-ಕಾಫಿ ಸ್ನಾಕ್ಸ್ಸ್ ವ್ಯವಸ್ಥೆ ಇತ್ತು.
ಒಟ್ಟಿನಲ್ಲಿ ಅತ್ಯಂತ ಸಮಯೋಚಿತ, ಹಾಗೂ ವ್ಯವಸ್ಥಿತ ಕಾರ್ಯಕ್ರಮ ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರ ಸಾಕ್ಷಿಯಾಯಿತು. ಪ್ರೋಗ್ರಾಂ ಮುಗಿದಮೇಲೂ ಸಭಾಂಗಣದಿಂದ ಹೊರಡುವುದು ಎಲ್ಲರಿಗೂ ಕಷ್ಟವಾಗಿತ್ತು.
ಸಮಾರಂಭ ಯಶಸ್ಸಿಗೆ ನೀವು, ನಿಮ್ಮಹಾರೈಕೆ ಸಹಕಾರ ವಲ್ಲದೇ ಶ್ರೀ ಸುಂದರೇಶ್ ಅವರ ಕುಟುಂಬ, ಸ್ನೇಹಿತರು, ಹಾಗೂ ಶ್ರೀ ಕೃಷ್ಣಪ್ರಸಾದ್ ಕುಟುಂಬ ಸ್ನೇಹಿತರು ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಹಕಾರವನ್ನು SPTಹಳೇ ವಿದ್ಯಾರ್ಥಿಗಳ ಸಂಘ ಪ್ರಶಂಸಿಸುತ್ತದೆ.

‘ಶಾಖಾಹಾರಿ’

ಪೂರ್ತಿ ಮಲೆನಾಡಿನಲ್ಲೇ ಚಿತ್ರೀಕರಣ ಆಗಿರುವ ‘ಶಾಖಾಹಾರಿ’ ಚಿತ್ರ ನಾಳೆ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ . ನೋಡಿ ಹರಸಿ