ಟೂನ್ ಟ್ರೈನ್ ಸವಾರಿ! ಡಿಸೆಂಬರ್ 6 ರಿಂದ 9. CARTOON HABBA-2018

ಕಾರ್ಟೂನು ಕುಂದಾಪ್ರ ಸಂಸ್ಥೆಯು ‘ಬದುಕಿನ ಪಯಣ, ನಗುವಿನ ನಿಲ್ದಾಣ’ ಶೀರ್ಷಿಕೆಯೊಂದಿಗೆ ಕಾರ್ಟೂನು ಹಬ್ಬ- 2018’ನ್ನು ಹಮ್ಮಿಕೊಂಡಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರರ್ಯ ಅವರ ನೇತೃತ್ವದಲ್ಲಿ ನಡೆಯಲಿದೆ. ಡಿಸೆಂಬರ್ 6ರ ಕಾರ್ಯಕ್ರಮಗಳು: ಕಾರ್ಟೂನು ಹಬ್ಬ ಡಿಸೆಂಬರ್ 6ರಿಂದ 9ರವರೆಗೆ ಕುಂದಾಪುರದ ಕಲಾಮಂದಿರಲ್ಲಿ ನಡೆಯಲಿದೆ. ಡಿಸೆಂಬರ್ 6ರಂದು ಕುಂದಾಪುರ ಕನ್ನಡದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿ ಸ್ಪರ್ಧೆ ನಡೆಯಲಿದೆ.

ಡಿಸೆಂಬರ್ 7ರ ಕಾರ್ಯಕ್ರಮಗಳು: ಕಾರ್ಟೂನು ಕಲಿ ಎನ್ನುವ ಕಾರ್ಟೂನು ಕಾರ್ಯಾಗಾರ ಏರ್ಪಡಿಸಲಾಗುತ್ತಿದ್ದು, ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ಐಡಿಯಾಗಳ ಬಗ್ಗೆ ತರಬೇತಿ ನೀಡಲು ಸಾಧ್ಯವಾಗದಿದ್ದರೂ ಕಾರ್ಟೂನ್ ಐಡಿಯಾಗಳು ಹೇಗೆ ಹುಟ್ಟಿತು ಎನ್ನುವುದರ ಬಗ್ಗೆ ಅನುಭವ ಹಂಚಿಕೊಳ್ಳಲಿದ್ದಾರೆ.

ಡಿಸೆಂಬರ್ 8ರ ಕಾರ್ಯಕ್ರಮ: ಅಂದು ಕಾರ್ಟೂನು ಮೊಗ್ಗು ಎನ್ನುವ ಉದಯೋನ್ಮುಖ ವ್ಯಂಗ್ಯಚಿತ್ರಕಾರರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಮಾಜ ಸೇವಕ ದತ್ತಾನಂದ ಗಂಗೊಳ್ಳಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.

ಡಿಸೆಂಬರ್ 9ರ ಕಾರ್ಯಕ್ರಮ: ಅಂದು ವ್ಯಂಗ್ಯಚಿತ್ರ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹರಿಣಿ, ರಘುಪತಿ, ಚಂದ್ರ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಗುತ್ತದೆ. ಅದರ ಜೊತೆಗೆ ಸಮಾರೋಪ ಸಮಾರಂಭ, ಪ್ರಶಸ್ತಿ ವಿತರಣೆ ಕಾರ್ಯಕ್ರಮವು ನಡೆಯಲಿದೆ.

READ MORE