New year…new smile

Caricatures of 21 cartoonists Gujjarappa, Nanjunda Swami, R A Suri, Satish Acharya, Chandrakant Acharya, G.S. Nagnath, Raghupati Shringeri, Manohar Acharya, Jayram Udupa, Jivan Shetti, James Waj, Subhash Chandra, Sanket Gurudatta, Satish Babu, Shailesh Ujire, Gicha Bolkatte, Prasanna Kumar, Dattathri M.N., Ravi Pujari, Yatish Siddakatte, and Chandra Gangoli would be on display at the ICC art gallery.

ಗಜವದನಾ ಹೇರಂಬಾ!

ಗಜವದನಾ ಹೇರಂಬಾ

ವಿಜಯಧ್ವಜ ಶತರಧಿ ಪ್ರತಿಭಾ

ಏಕದಂತ ವೈಕಲ್ಯಾಂತ…

ವೃಧ್ದಿ ಸಿಧ್ದಿದ್ವಯರಾಕಾಂತ

ಗಜವದನಾ ಹೇ ರಂಬಾ….

ಈಹಾಡು ಕೇಳಿದಾಗಲೆಲ್ಲಾ ನನಗೆ ಊರಿನದೇ ನೆನಪಾಗುತ್ತದೆ. ಈ ಹಾಡು ನಮ್ಮೂರ ಹತ್ತಿರದ ಹೇರಂಬಾಪುರದ ಸ್ವಂತ ಹಾಡು ಎಂದೇ ಬಹುಕಾಲ ಅಂದುಕೊಂಡಿದ್ದೆ!ಹೇರಂಬಾಪುರ ನಮ್ಮೂರಿನಿಂದ ಎರಡೇ ಕಿಲೋಮೀಟರ್ ದೂರ ವಿರುವ ಊರು. ಆದರೆ ಸರಿಯಾಗಿ ನೋಡಿದರೆ ನಮ್ಮನೆಯ ಸಿಮೆಂಟು ಕಟ್ಟೆಯ ಮೇಲೆ ಕಾಫಿ ಕುಡಿಯುತ್ತಾ ಕುಳಿತು, ಬಲಕ್ಕೆ ನೇರವಾಗಿ ನೊಡಿದರೆ ಕಾಣುವ ಸ್ವರ್ಗದಂತ ಊರು. ನಮ್ಮನೆ ಕಟ್ಟೆಯಿಂದ ಹೇರಂಬಾಪುರ ಮತ್ತು ನರ್ಜಿ ಗುಡ್ಡಗಳು ಸೊಗಸಾಗಿ ಕಾಣುತ್ತದೆ.

ಅಲ್ಲಿನ ತೋಟದ ಮದ್ಯದಲ್ಲಿನ ಜಲದುರ್ಗಾಂಬ ದೇವಸ್ಥಾನ ವನ್ನು ಸುತ್ತಲೂ ಆವರಿಸಿರುವ ನೀರು! ಪ್ರಕೃತಿ ಸೌಂದರ್ಯದ ಹೇರಂಬಾಪುರ ಎಷ್ಟು ಚೆಂದವೋ ಅದಕ್ಕಿಂತ ಅಲ್ಲಿನ ಜನರೆಲ್ಲರೂ ನನಗೆ ವಿಶೇಷ ವ್ಯಕ್ತಿಗಳು.ನೋಡುವುದಕ್ಕೆ ಸಾದಾರಣ ವ್ಯಕ್ತಿ ಗಳಂತೆ ಕಂಡರೂ ಅವರಲ್ಲಿನ ಬುದ್ದಿವಂತಿಕೆಯೇ ವಿಶೇಷ.

ಈ ಹಾಡಿಗೂ ಹೇರಂಬಾಪುರ ಕ್ಕೂ ಸಂಬಂಧ ಏನು ಅಂತ?!

ನಾವೆಲ್ಲ ಚಿಕ್ಕವರಿದ್ದಾಗ, ಹೇರಂಬಾಪುರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಸ್ಥಾನ! ಜಲದುರ್ಗಾಂಬ ಯುವಕ ಸಂಘದವರು ಹೇರಂಬಾಪುರದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವ ಗಳನ್ನು ನಡೆಸುತ್ತಿದ್ದರು. ನಾವೆಲ್ಲ ನೀನಾಸಂ ಹೆಸರು ಕೇಳಿದ್ದೇ ಆಗ!. ರಾಜ್ಯದ ಮೂಲೆ ಮೂಲೆಗಳಿಂದ ಹವ್ಯಾಸಿ, ಕಂಪೆನಿ ನಾಟಕ ತಂಡಗಳು 15-20 ದಿನಗಳು ನಿರಂತರವಾಗಿ ಪ್ರದರ್ಶನ ನೀಡುತ್ತಿದ್ದವು.ಗಮನಿಸಿ ಆಗ ಇಷ್ಟೊಂದು ಅನುಕೂಲತೆಗಳಿರಲಿಲ್ಲ. ಹೆಚ್ಚೇನು, ಹೇರಂಬಾಪುರಕ್ಕೊಂದು ಟಾರ್ ರಸ್ತೆಯೇ ಇರಲಿಲ್ಲ. ಮಣ್ಣು ರಸ್ತೆ ಇದ್ದದ್ದು ಜಲ್ಲಿ ರಸ್ತೆ ಯಾಯಿತು. ಸಂಪರ್ಕಸಾಧನಗಳಂತೂ ಇರಲಿಲ್ಲ. ಆದರೆ ಅಲ್ಲಿನ ಯುವಕಸಂಘದವರಿಗೆ ಸಾಂಸ್ಕೃತಿಕ ಹಿನ್ನಲೆಯಿತ್ತು ಹಾಗೂ ಸ್ಪಷ್ಟ ನಿಲುವಿತ್ತು. ಹಾಗಾಗಿ ಅದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮ ಗಳನ್ನು ಸರಾಗವಾಗಿ ನಡೆಸುತ್ತಾ ಬಂದಿದ್ದರು.ನಾನಂತೂ ಆಗ ಮಿಡಲ್ ಸ್ಕೂಲ್ ಓದುತ್ತಿದ್ದೆ ಅನ್ನಿಸುತ್ತೆ. ನಾವು ರಾತ್ರಿ ನಾಟಕ ನೋಡುವುದಕ್ಕೆ ಮನೆಮಂದಿಯಲ್ಲ ನಡೆದುಕೊಂಡು ಹೋಗಿ ನಾಟಕ ನೋಡಿ ಮಧ್ಯರಾತ್ರಿ ವಾಪಾಸು ಬರುತ್ತಿದ್ದೆವು. ಯಾವ ನಾಟಕವನ್ನೂ ಮಿಸ್ ಮಾಡುತ್ತಿರಲಿಲ್ಲ!ಆಗ ನೋಡಿದ ನಾಟಕಗಳಲ್ಲಿ ಕೇಳಿದ ಈ ಗೀತೆ, ಹೇರಂಬಾಪುರ ದ ಸ್ವಂತ ಗೀತೆ ಎನ್ನುವ ಭಾವ ನನಗೀಗಲೂ ಇದೆ.

ಈಗಲೂ ಹೇರಂಬಾಪುರ ಅಷ್ಟೇ ಚಂದದ ಊರು, ಹೆಚ್ಚೆಂದರೆ ನಾವು ನಾಟಕ ನೋಡುತ್ತಿದ್ದ ಜಾಗದಲ್ಲಿ ರಬ್ಬರ್ ಕಾಡು ಆಗಿದೆ ಓಡಾಡುವುದಕ್ಕೆ ಟಾರ್ ರಸ್ತೆಯೇ ಇದೆ, ನಾನು ಆ ರಸ್ತೆಯಲ್ಲಿ ಓಡಾಡುವಾಗೆಲ್ಲ ಕೇಳಲು ಬಯಸುತ್ತೇನೆ…ಗಜವದನಾ ಹೇರಂಬ…..#ಹೇರಂಬಾಪುರ#ನೆನಪು